ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯಪುರ: ಗುಮ್ಮಟನಗರಿ ವಿಜಯಪುರದ ಎರಡು ಮನೆಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ನಗರದ ಕಸ್ತೂರಿ ಕಾಲೋನಿಯಲ್ಲಿರುವ ಶೇಖ್ ಹಾಗೂ ಶಕೀಲ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಎರಡು ಮನೆಯ ಬೀಗ ಒಡೆದು 4.35 ಲಕ್ಷ ರೂಪಾಯಿ ಹಾಗೂ 50 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಮೂರು ನಾಯಿಗಳನ್ನು ಹತ್ಯೆ ಮಾಡಿದ್ದಾರೆ. ಶೇಖ್ ಎಂಬುವರು ಮುಂಬೈಗೆ ಹೋದಾಗ 35 ಸಾವಿರ ನಗದು, ವಿವಿಧ ವಸ್ತುಗಳ ಕಳ್ಳತನ ಮಾಡಲಾಗಿದೆ.
ಶಕೀಲ್ ಎಂಬುವರ ಮನೆಯಲ್ಲಿ ನಾಲ್ಕು ಲಕ್ಷ ನಗದು, 50 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಜಲನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.