ದರ್ಶನ್ ವಿರುದ್ಧದ ಅತಿಯಾದ ಅಪಪ್ರಚಾರ ಫ್ಯಾನ್ಸ್ ಕೆರಳಿಸಿದ್ಯಾ?

69

ಪ್ರಜಾಸ್ತ್ರ ಸಿನಿಮಾ ಡಸ್ಕ್

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಸೇರಿ 17 ಜನರು ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದಾರೆ. ವಿಚಾರಣಾಧಿ ಖೈದಿ ಎಂದು 6106 ನಂಬರ್ ನೀಡಲಾಗಿದೆ. ಈ ನಂಬರ್ ದೊಡ್ಡ ಟ್ರೆಂಡ್ ಆಗಿರುವುದು ಎಲ್ಲರಿಗೂ ಗೊತ್ತಿರುವುದೆ. ಇದಕ್ಕೆ ಕಾರಣ ನಟ ದರ್ಶನ್ ವಿರುದ್ಧ ಅತಿಯಾಗಿ ಅಪಪ್ರಚಾರ ಮಾಡಲಾಗ್ತಿದೆ ಎಂದು ಹೇಳಲಾಗುತ್ತಿದೆ.

ದರ್ಶನ್ ಅಭಿಮಾನಿಗಳು ಮಾಧ್ಯಮಗಳ ವಿರುದ್ಧ ತೀವ್ರವಾದ ಆಕ್ರೋಶ ಹೊರ ಹಾಕುತ್ತಿದ್ದಾರೆ. ಜಗತ್ತಿನಲ್ಲಿ ಇಂತಹದೊಂದು ಘಟನೆ ನಡದೇ ಇಲ್ಲ, ತಿಳಿದೊ ತಿಳಿಯದೊ ಇದುವರೆಗೂ ಯಾರೂ ಕಾನೂನುನ್ನು ಕೈಗೆ ತೆಗೆದುಕೊಂಡೇ ಇಲ್ಲ.. ದರ್ಶನ್ ಹಾಗೂ ಅವರ ಟೀಂ ಮಾತ್ರ ಇಂತಹದೊಂದ ಕೆಲಸ ಮಾಡಿದೆ. ಅವರಿಗೆ ಜೀವಾವಧಿ ಶಿಕ್ಷೆ ಅಥವ ಮರಣದಂಡನೆ ಆದರೂ ಆಗಬಹುದು ಎನ್ನುವಂತೆ ಬಿಂಬಿಸ್ತಿರುವುದು. ಬರೀ ನೆಗೆಟಿವ್ ಸ್ಟೋರಿಗಳನ್ನು ಮಾಡುತ್ತಿರುವುದೇ ಅವರ ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಲು ಕಾರಣವಾಗಿದೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ.

ಚಿತ್ರರಂಗದಲ್ಲಿ ಮೊದಲೇ ಫ್ಯಾನ್ಸ್ ವಾರ್ ಇದೆ. ಇದನ್ನು ಕೆಲವರು ಬಂಡವಾಳ ಮಾಡಿಕೊಂಡು ದರ್ಶನ್ ಹಾಗೂ ಅವರ ಫ್ಯಾನ್ಸ್ ವಿರುದ್ಧ ಆಡುತ್ತಿರುವ ಮಾತುಗಳಿಗೆ ಇವರು ಪ್ರತ್ಯುತ್ತರ ನೀಡುವ ಭರದಲ್ಲಿ ಸಿಟ್ಟು, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಯಾಗಲಿ. ನ್ಯಾಯಾಲಯದಲ್ಲಿ ತನಿಖೆಯಾಗಲಿ. ಈ ಪ್ರಕರಣದಲ್ಲಿ ಯಾರ ಪಾತ್ರ ಏನಿದೆ? ಎಷ್ಟಿದೆ? ತೀರ್ಪು ಏನು ಬರುತ್ತೆ ಎಂದು ಕಾಯುವಷ್ಟು ತಾಳ್ಮೆ ಇರದೆ ದರ್ಶನ್ ಈ ಸಮಾಜದಲ್ಲಿ ಇರಲು ಸಾಧ್ಯವೇ ಇಲ್ಲ ಎನ್ನುಷ್ಟರ ಮಟ್ಟಿಗೆ ದ್ವೇಷದ ಹೇಳಿಕೆ ನೀಡುತ್ತಿರುವವರ ವಿರುದ್ಧ ಅಷ್ಟೇ ಆಕ್ರೋಶ ವಿರೋಧ ಕೇಳಿ ಬರುತ್ತಿದೆ. ನ್ಯಾಯಾಲಯದ ತೀರ್ಪು ಬಂದ ಮೇಲೆ ಎಲ್ಲದಕ್ಕೂ ಉತ್ತರ ಸಿಗಲಿದೆ.  




error: Content is protected !!