ಪತ್ರಿಕಾ ವೃತ್ತಿಯೇ ಸವಾಲಿನದ್ದು: ಪವಿತ್ರಾ ಅಕ್ಕ

221

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಮಾಜದ ಆಗು ಹೋಗುಗಳಿಗೆ ಸದಾ ಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರ ವೃತ್ತಿಯೇ ಸವಾಲಿನದ್ದು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಿಂದಗಿಯ ಮುಖ್ಯ ಸಂಚಾಲಕರಾದ ಪವಿತ್ರಾ ಅಕ್ಕ ಹೇಳಿದರು.

ಕನ್ನಡ ಪತ್ರಿಕಾ ದಿನಾಚರಣೆ ನಿಮಿತ್ತ ಗುರುವಾರ ಆಶ್ರಮದಲ್ಲಿ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಮಾತನಾಡಿದರು. ಸಾಕಷ್ಟು ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರ ನಡುವೆಯೂ ಸಮಾಜಕ್ಕೆ ಏನಾದರೂ ನೀಡಬೇಕು ಎನ್ನುವ ಕಾರಣಕ್ಕೆ ಸದಾ ತುಡಿಯುತ್ತಾರೆ. ಅಂತಹ ಪತ್ರಕರ್ತರನ್ನು ಗೌರವಿಸಿರುವುದು ಖುಷಿ ನೀಡಿದೆ ಎಂದರು.

ಇದೇ ವೇಳೆ ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಹಿರಿಯ ಪತ್ರಕರ್ತರಾದ ಬೆನಕರಾಜ ಜೋಗುರ, ಟಿ.ಕೆ ಮಲಗೊಂಡ, ರಮೇಶ ಪೂಜಾರ, ನಾಗೇಶ ತಳವಾರ ಮಾತನಾಡಿ, ಪ್ರಸ್ತುತ ದಿನದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.

ಕಾರ್ಯನಿರರ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ, ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಅಲ್ಲಾಪೂರ, ಅಸ್ಪಾಕ ಕರ್ಜಗಿ, ವಿಜಯಕುಮಾರ ಪತ್ತಾರ, ಶಿವಾನಂದ ಆಲಮೇಲ, ಸುದರ್ಶನ ಜಿಂಗಾಣಿ, ಮಹಾಂತೇಶ ನೂಲಾನವರ, ಆರೀಫ ಅಂತರಗಂಗಿ, ಗುಂಡು ಕುಲ್ಕರ್ಣಿ, ಅಂಬರೀಶ ಸುಣಗಾರ, ಶ್ರೀಶೈಲ ಗೊರಗುಂಡಗಿ, ವಸೀಮ ಗೋಗಿ, ರಶೀದ ಕುಮಸಗಿ, ಪ್ರೇಮಕುಮಾರ ಹಜ್ಜಣ್ಣವರ ಇವರನ್ನು ಗೌರವಿಸಲಾಯಿತು.

ವಿಜಯಕುಮಾರ ತೇಲಿ, ತಾನಾಜಿ ಕನಸೇ, ಸೋಮನಾಥ ಬುಳ್ಳಾ, ಕೆ.ಎಸ್ ಪತ್ತಾರ, ಶ್ರೀಶೈಲಗೌಡ ಮಾಗಣಗೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸಿ.ಎಂ ಮನಗೂಳಿ ಕಾಲೇಜಿನ ಪ್ರಾಚಾರ್ಯರಾದ ಬಿ.ಜಿ ಪಾಟೀಲ ಪ್ರಾಸ್ತಾವಿಕ ನುಡಿಗಳಲ್ಲಿ ಕನ್ನಡ ಪತ್ರಿಕಾರಂಗ ನಡೆದು ಬಂದ ಹಾದಿ ಹಾಗೂ ಪ್ರಜಾಪಿತ ಬ್ರಹ್ಮಕುಮಾರ ಈಶ್ವರಿ ವಿಶ್ವವಿದ್ಯಾಲಯದ ಕುರಿತು ಹೇಳಿದರು. ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿ ವಂದಿಸಿದರು.




error: Content is protected !!