ಕಂಗನಾ ಕೆನ್ನೆಗೆ ಹೊಡೆದ ಕುಲ್ವಿಂದರ್ ಬೆಂಗಳೂರಿಗೆ ವರ್ಗಾವಣೆ

62

ಪ್ರಜಾಸ್ತ್ರ ಸುದ್ದಿ

ಚಂಡೀಗಢ: ರೈತ ವಿರೋಧಿ ಕೃಷಿ ಕಾನೂನು ವಿರುದ್ಧ ಹೋರಾಟ ಮಾಡಿದ ರೈತರ ಬಗ್ಗೆ ಅಗೌರವದಿಂದ ಕಾಮೆಂಟ್ ಮಾಡಿದ್ದ ಕಾರಣಕ್ಕೆ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಮಹಿಳಾ ಕಾನ್ ಸ್ಟೇಬಲ್ ಕುಲ್ವಿಂದರ್ ಕೌರ್ ಕಪಾಳಕ್ಕೆ ಹೊಡೆದಿದ್ದರು. ಇದು ದೊಡ್ಡ ಸುದ್ದಿಯಾಯಿತು.

ಕುಲ್ವಿಂದರ್ ಕೌರ್ ಗೆ ಅನೇಕರು ಬೆಂಬಲ ನೀಡಿದರು. ಅಷ್ಟೇ ವಿರೋಧಗಳು ಸಹ ವ್ಯಕ್ತವಾದವು. ಹರಿಯಾಣ ಸರ್ಕಾರ ಆಕೆಯನ್ನು ಅಮಾನತು ಮಾಡಿತು. ಇದರ ತನಿಖೆಗೆ ವಿಶೇಷ ತಂಡ ರಚನೆ ಮಾಡಿತು. ಈಗ ತನಿಖೆ ಪೂರ್ಣಗೊಂಡಿದೆ. ಅಮಾನತು ಆದೇಶ ಹಿಂಪಡೆಯಲಾಗಿದೆ.

ಈಗ ಕುಲ್ವಿಂದರ್ ಕೌರ್ ಮರಳಿ ಕೆಲಸಕ್ಕೆ ಸೇರಿದ್ದಾರೆ. ಆದರೆ, ಅವರನ್ನು ಚಂಡೀಗಢದಿಂದ ಬೆಂಗಳೂರಿನ ನೆಲಮಂಗಲ ತಾಲೂಕಿನ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ವರ್ಗಾವಣೆ ಮಾಡಲಾಗಿದೆ.




error: Content is protected !!