ಪ್ರಜಾಸ್ತ್ರ ಸುದ್ದಿ
ವಿಜಯಪುರ: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ನಾಲ್ಕು ಎಕರೆ ಕಬ್ಬು ಭಸ್ಮವಾಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ವಂದಾಲ ಗ್ರಾಮದಲ್ಲಿ ನಡೆದಿದೆ. ರೈತ ಅನೀಲಕುಮಾರ ಬಡಿಗೇರ ಅನ್ನೋ ರೈತನ ಹೊಲದಲ್ಲಿನ ಕಬ್ಬು ಬೆಂಕಿಗೆ ಆಹುತಿಯಾಗಿದೆ.
ವಿದ್ಯುತ್ ತಂತಿ ಹರಿದ ಪರಿಣಾಮ 4 ಎಕರೆಯಲ್ಲಿ ಬೆಳೆದ ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ. ತುಂಬಾ ಹಳೆಯದಾದ ವಿದ್ಯುತ್ ತಂತಿಯನ್ನು ಕೆಇಬಿ ಅವರು ತೆಗೆಯದ ಇರುವುದರಿಂದ ಈ ಅನಾಹುತ ನಡೆದಿದೆ ಎಂದು ಆರೋಪಿಸಲಾಗಿದೆ. ತಮ್ಮ ವರ್ಷದ ಬದುಕು ಹಾಳಾಗಿದ್ದು, ಹೆಸ್ಕಾಂ ಹಾಗೂ ಸರ್ಕಾರ ಪರಿಹಾರ ನೀಡಬೇಕೆಂದು ರೈತ ಆಗ್ರಹಿಸಿದ್ದಾನೆ.