ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಂಬೈನಲ್ಲಿ ಅಟಲ್ ಸೇತು ಭಾಗವಾಗಿ ನಿರ್ಮಾಣವಾದ ರಸ್ತೆ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾಡಿದ ಪೋಸ್ಟ್ ಗೆ, ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ತಿರುಗೇಟು ನೀಡಿದ್ದಾರೆ.
ಬುಲೆಟ್ ಟ್ರೇನ್ ಬಗ್ಗೆ ಏನಾದರೂ ಮಾತನಾಡ್ತೀರಾ? ಮುಂಬೈ-ಅಹಮದಾಬಾದ್ ಬುಲೆಟ್ ಟ್ರೇನ್: ತಯಾರಿಕೆಯ ದುರಂತ. ಬೂಟು ನೆಕ್ಕುವುದು ಬಿಡಿ. ಇದು ನಿಮಗೆ ಮೆಗಾಸ್ಟಾರ್ ಮಾಡಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ.. ಪಶ್ಚಿಮ ಭಾರತದಿಂದ ಪೂರ್ವ ಭಾರತಕ್ಕೆ ಜನರನ್ನು ಸಂಪರ್ಕಿಸುತ್ತದೆ.. ಹೃದಯಗಳನ್ನು ಸಂಪರ್ಕಿಸುತ್ತದೆ. ಮೈ ಇಂಡಿಯಾ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣಗೆ ಈ ರೀತಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸಹ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತದ ಆದಾಯ ಅಸಮಾನತೆ ಗಗನಕ್ಕೇರಿದೆ. ಯಾವುದೇ ಮೂರ್ಖಪಕ್ಷವೂ ಕಾಂಕ್ರೀಟ್ ಸುರಿಯಬಹುದು. ಮೂಲಸೌಕರ್ಯ ನಿರ್ಮಿಸಬಹುದು. ಸಮಾಜವನ್ನು ಸುಸ್ಥಿರವಾಗಿ, ಸಾಮಾನವಾಗಿ ನಿರ್ಮಿಸಲು ಒಳನೋಟದ ಅಗತ್ಯವಿದೆ. ಸೆಲೆಬ್ರಿಟಿಗಳ ಅಜ್ಞಾನವು ಸವಲತ್ತುಗಳ ಫ್ರ್ಯಾಕಿಂಗ್ ಬ್ರಿಲಿಯಂಟ್ ರೂಪವಾಗಿದೆ ಅಂತಾ ಕಿಡಿ ಕಾರಿದ್ದಾರೆ.