ಪ್ರಜಾಸ್ತ್ರ ಸುದ್ದಿ
ಕಲಬುರಗಿ: ವಿಜಯಪುರ-ಬಸವಕಲ್ಯಾಣ ನಡುವೆ ಸಂಚರಿಸುವ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸೋಮವಾರ ಮುಂಜಾನೆ ಅಪಘಾತ ಸಂಭವಿಸಿದೆ. ಇದರಿಂದಾಗಿ ಮೂವರು ಸ್ನೇಹಿತರು ಮೃತಪಟ್ಟಿದ್ದಾರೆ.
ಕಮಲಾಪುರ ತಾಲೂಕಿನ ಡೊಂಗರಗಾಂವ್ ಕ್ರಾಸ್ ಹತ್ತಿರ ಈ ಘಟನೆ ನಡೆದಿದೆ. ಕಿಣ್ಣಿ ಸಡಕ್ ಗ್ರಾಮದ ಚಂದ್ರಕಾಂತ್ ಹೊಳಕುಂದಿ(23), ಸಮೀರ್ ಜಮೀರ್ ಸಾಬ್(22) ಹಾಗೂ ವಿಶಾಲ ಸಂಜೀವಕುಮಾರ ಜಾದವ(20) ಮೃತ ದುರ್ದೈವಿಗಳು.
ಎಲ್ ಅಂಡ್ ಟೀ ಫೈನಾನ್ಸ್ ನಲ್ಲಿ ಚಂದ್ರಕಾಂತ್ ಉದ್ಯೋಗ ಪಡೆದಿದ್ದರು. ನಾಳೆ ಹುಬ್ಬಳ್ಳಿಯಲ್ಲಿ ದಾಖಲೆ ಪರಿಶೀಲನೆ ಹಾಗೂ ಸಂದರ್ಶನ ಇತ್ತು. ಹೀಗಾಗಿ ಸ್ನೇಹಿತರು ಹುಬ್ಬಳ್ಳಿಗೆ ಹೋಗಲು ಕಮಲಾಪುರಕ್ಕೆ ಬಿಡಲು ಹೊರಟಿದ್ದರು. ವಿಧಿ ಬೇರೆಯದ್ದೇ ಬಯಸಿತ್ತು. ಹೀಗಾಗಿ ಕಲಬುರಗಿಯಿಂದ ಹುಮನಾಬಾದ್ ಕಡೆ ಹೊರಟಿದ್ದ ಬಸ್ ನಡುವೆ ಅಪಘಾತ ಸಂಭವಿಸಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.