ಅಯೋಧ್ಯೆಯಲ್ಲಿ ಎಸ್ಪಿ ಅಭ್ಯರ್ಥಿ ಗೆಲುವು

98

ಪ್ರಜಾಸ್ತ್ರ ಸುದ್ದಿ

ಅಯೋಧ್ಯೆ: ಬಿಜೆಪಿಯ ಪ್ರಮುಖ ಅಝಂಡಾಗಳಲ್ಲಿ ಒಂದಾಗಿದ್ದ ಶ್ರೀರಾಮ ಮಂದಿರ ನಿರ್ಮಾಣವನ್ನು ಮಾಡಿತು. ಅದನ್ನು ಪ್ರಧಾನಿ ಮೋದಿ ಉದ್ಘಾಟನೆ ಸಹ ಮಾಡಿದರು. ಆಗ ಅಪೂರ್ಣ ರಾಮ ಮಂದಿರ ಉದ್ಘಾಟಿಸಲಾಗಿದೆ ಎಂದು ಸ್ವತಃ ಅಷ್ಟಮಠಗಳ ಹಲವು ಗುರುಗಳು ವಿರೋಧಿಸಿದರು.

ರಾಮ ಜಪದ ಮೂಲಕ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸುತ್ತೇವೆ. ಚಾರ್ ಸೊ ಪಾರ್(400 ದಾಟುತ್ತೇವೆ) ಎನ್ನುವ ಸ್ಲೋಗನ್ ತಮ್ಮ ಕೈ ಹಿಡಿಯುತ್ತೆ ಎಂದುಕೊಂಡಿದ್ದ ಮೋದಿ, ಅಮಿತ್ ಶಾ ಜೋಡಿಗೆ ಭಾರೀ ಹಿನ್ನಡೆಯಾಗಿದೆ. ಸ್ವತಃ ಶ್ರೀರಾಮನ ನಾಡು ಅಯೋಧ್ಯೆಯಲ್ಲಿಯೇ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ.

ಬಿಜೆಪಿಯ ಲಾಲು ಸಿಂಗ್ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವದೇಶ್ ಪ್ರಸಾದ್ ವಿರುದ್ಧ ಸೋಲು ಕಂಡಿದ್ದಾರೆ. 54,567 ಮತಗಳ ಅಂತರದಿಂದ ಅವದೇಶ್ ಪ್ರಸಾದ್ ವಿಜಯ ಸಾಧಿಸಿದ್ದಾರೆ. ಅವದೇಶ್ 5,54,289 ಮತಗಳನ್ನು ಪಡೆದರೆ, ಲಾಲು ಸಿಂಗ್ 4,99,722 ಮತಗಳನ್ನು ಪಡೆದಿದ್ದಾರೆ.




error: Content is protected !!