ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಸದಸ್ಯತ್ವಕ್ಕೆ 3 ಪಕ್ಷಗಳ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ಪ್ರಕಟಣೆ ಹೊರಡಿಸಿದ್ದಾರೆ.
ಕಾಂಗ್ರೆಸ್ ನಿಂದ ಐವನ್ ಡಿಸೋಜಾ, ಜಗದೇವ್ ಗುತ್ತೇದಾರ್, ಎನ್.ಎಸ್ ಬೋಸರಾಜ್, ಡಾ.ಯತೀಂದ್ರ, ಕೆ.ಗೋವಿಂದರಾಜ್, ಬಲ್ಕಿಸ್ ಬಾನು ಹಾಗೂ ಎ.ವಸಂತಕುಮಾರ್ ಆಯ್ಕೆ ಆಗಿದ್ದಾರೆ.
ಬಿಜೆಪಿಯಿಂದ ಸಿ.ಟಿ ರವಿ, ಎಂ.ಜೆ ಮುಳೆ, ಎನ್.ರವಿಕುಮಾರ್, ಜೆಡಿಎಸ್ ನಿಂದ ಟಿ.ಎನ್ ಜವರಾಯಿಗೌಡ ಅವಿರೋಧ ಆಯ್ಕೆ ಆಗಿದ್ದಾರೆ.