20 ವರ್ಷಗಳ ಬೇಡಿಕೆ ಈಡೇರಿಸಲಾಗಿದೆ: ಶಾಸಕ ಅಶೋಕ ಮನಗೂಳಿ

125

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಿಂದಗಿಯಿಂದ ಮೋರಟಗಿ ಮಾರ್ಗವಾಗಿ ಆಲಮೇಲ, ಸಿಂದಗಿಯಿಂದ ಅಫಜಲಪುರ ಹಾಗೂ ಸಿಂದಗಿಯಿಂದ ಬ್ಯಾಡಗಿಹಾಳ ಗ್ರಾಮಗಳಿಗೆ ನೂತನ ಬಸ್ ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆ ಬುಧವಾರ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಮೂರು ಹೊಸ ಮಾರ್ಗಗಳ ಬಸ್ ಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕಳೆದ ಸುಮಾರು 20 ವರ್ಷಗಳಿಂದ ಈ ಭಾಗಗಳಿಗೆ ಸಾರಿಗೆ ಮಾರ್ಗ ಇರಲಿಲ್ಲ. ಶಾಸಕನಾಗಿ ಆಯ್ಕೆ ಆಗಿ ಬಂದ ಮೇಲೆ ಆ ಎಲ್ಲ ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಜನರು ಬಸ್ಸಿನ ಬೇಡಿಕೆ ಇಟ್ಟಿದ್ದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವಿದ್ದರೂ ನಮಗೆ ಸಿಗುತ್ತಿಲ್ಲ. ಹೀಗಾಗಿ ಬಸ್ ವ್ಯವಸ್ಥೆ ಮಾಡಿ ಎಂದಿದ್ದರು. ಹೀಗಾಗಿ ಅದನ್ನು ಇಂದು ನೆರವೇರಿಸಲಾಗಿದೆ ಅಂತಾ ಹೇಳಿದರು.

ಈ ವೇಳೆ ಸಿಂದಗಿ ಬಸ್ ಡಿಪೋ ವ್ಯವಸ್ಥಾಪಕ ರೇವಣ್ಣಸಿದ್ದಪ್ಪ ಖೈನೂರ, ಸಿಬ್ಬಂದಿ ಈರಣ್ಣ ನಾವಿ, ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಪ್ರವೀಣ ಕಂಟಿಕಗೊಂಡ, ವಿಜಯಕುಮಾರ ಯಾಳವಾರ, ಪರಶುರಾಮ ಉಪ್ಪಾರ ಸೇರಿದಂತೆ ಅನೇಕರು ಉಪಸ್ಥಿರಿದ್ದರು.




error: Content is protected !!