ಸೂರಜ್ ರೇವಣ್ಣ ಪ್ರಕರಣ ಸಿಐಡಿಗೆ: ಜಿ.ಪರಮೇಶ್ವರ್

72

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಮೇಲೆ ಕೇಳಿ ಬಂದಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಇದೊಂದು ಗಂಭೀರ ಪ್ರಕರಣವಾಗಿದೆ. ಸಿಐಡಿಗೆ ವಹಿಸಲಾಗುವುದು ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಗಂಭೀರ ಪ್ರಕರಣವಾಗಿದೆ. ಸೂರಜ್ ರೇವಣ್ಣ ನೀಡಿರುವ ಪ್ರತಿದೂರಿನ ಬಗ್ಗೆಯೂ ಕೂಲಂಕುಷವಾಗಿಯೂ ತನಿಖೆ ನಡೆಸಲಾಗುತ್ತೆ. ಈ ಬಗ್ಗೆ ಪೊಲೀಸರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಅಂತಾ ಹೇಳಿದರು.

ಸೂರಜ್ ರೇವಣ್ಣ ಸಹೋದರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಆರೋಪವಿದ್ದು ಜೈಲು ಪಾಲಾಗಿದ್ದಾರೆ. ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಹೆಚ್.ಡಿ ರೇವಣ್ಣ ಬಂಧನವಾಗಿ ಬೇಲ್ ಆಗಿದೆ. ತಾಯಿ ಭವಾನಿ ರೇವಣ್ಣ ಮೇಲೆಯೂ ಸಂತ್ರಸ್ತೆಯ ಅಪಹರಣದ ಆರೋಪವಿದ್ದು ತನಿಖೆ ಎದುರಿಸುತ್ತಿದ್ದಾರೆ. ಒಟ್ಟಿನಲ್ಲಿ ಹೆಚ್.ಡಿ ರೇವಣ್ಣ ಪೂರ್ತಿ ಕುಟುಂಬ ಈಗ ಪೊಲೀಸ್ ಠಾಣೆ, ಜೈಲು, ಕೋರ್ಟ್ ಎನ್ನುವಂತಾಗಿದೆ.




error: Content is protected !!