ಪ್ರಜಾಸ್ತ್ರ ಸುದ್ದಿ
ಮಂಗಳೂರು: ಆಟೋ ತೊಳೆಯುತ್ತಿದ್ದಾಗ ವಿದ್ಯುತ್ ತಂತಿ ತುಂಡಾಗಿ ಚಾಲಕನೊಬ್ಬನ ಮೇಲೆ ಬಿದ್ದಿದೆ. ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ಚಾಲಕನಿಗೂ ಇದು ತಗುಲಿ ಇಬ್ಬರು ಮೃತಪಟ್ಟ ದಾರುಣ ಘಟನೆ ಪಾಂಡೇಶ್ವರದಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವರಾಜಗೌಡ ಹಾಗೂ ಪುತ್ತೂರಿನ ರಾಜು ಮೃತ ಆಟೋ ಚಾಲಕರು. ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಮರಗಿಡಿಗಳು, ವಿದ್ಯುತ್ ಕಂಬಗಳು ಸಹ ಬೀಳುತ್ತಿವೆ. ಈ ಘಟನೆಯು ಸಹ ಮಳೆಯಿಂದಾಗಿಯೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ ಎನ್ನಲಾಗುತ್ತಿದೆ.