ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ಟಿ-20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಸ್ವಾಗತಿಸಲು ಇಡೀ ದೇಶ ಸಜ್ಜಾಗಿದೆ. ಆದರೆ, ಬಾರ್ಬಡೋಸ್ ನಲ್ಲಿ ಭಾರಿ ಚಂಡಮಾರುತ ಸೃಷ್ಟಿಯಾಗಿದೆ. ಇದರಿಂದಾಗಿ ವಿಮಾನ ಹಾರಾಟ ರದ್ದು ಮಾಡಿದ್ದು, ಇಂಡಿಯನ್ ಕ್ರಿಕೆಟ್ ಟೀಂ ವಿಮಾನ ನಿಲ್ದಾಣದಲ್ಲಿ ಸಿಲುಕಿದೆ.
ಭಾನುವಾರ ಸಂಜೆಯಿಂದಲೇ ಕರ್ಫ್ಯೂ ಜಾರಿಗೆ ಮಾಡಲಾಗಿದೆ. ಸಾರ್ವಜಿಕರ ಓಡಾಟಕ್ಕೆ ನಿರ್ಬಂಧವಿದೆ. ಕಚೇರಿ, ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಆಟಗಾರರು, ಮಾಧ್ಯಮದವರು ಬಾರ್ಬಡೋಸ್ ನಲ್ಲಿ ಸಿಲುಕಿದ್ದಾರೆ.