ರಾಜ್ಯದಲ್ಲಿ ಹೊಸ ಕಾನೂನು ಅಡಿ ಮೊದಲ ಪ್ರಕರಣ ದಾಖಲು

62

ಪ್ರಜಾಸ್ತ್ರ ಸುದ್ದಿ

ಹಾಸನ: ಚಾಲಕನ ಅಜಾಗುರಕತೆಯಿಂದ ಕಾರು ಅಪಘಾತವಾಗಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಹೊಸ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಕಾರು ಅಪಘಾತವಾಗಿ ಇಂದುಮತಿ(67) ಎನ್ನುವ ಮಹಿಳೆ ಮೃತಪಟ್ಟಿದ್ದಾರೆ.

ಇಂದುಮತಿ ಅಳಿಯ ಎಚ್.ಎಸ್ ರವಿ ಎಂಬುವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ ಕಲಂ 281, 106ರ ಅಡಿಯಲ್ಲಿ ಪ್ರಕಣ ದಾಖಲಾಗಿದೆ. ಅತಿ ವೇಗ, ಚಾಲಕನ ನಿರ್ಲಕ್ಷ್ಯತನಕ್ಕೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಕಾರು ಚಾಲಕ ಸಾಗರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇಂದುಮತಿ ಹಾಗೂ ಪತಿ ಯೋಗೇಶ್ ಎಂಬುವರು ಕಾಶಿ ಯಾತ್ರೆ ಮುಗಿಸಿಕೊಂಡು ಜೂನ್ 30ರಂದು ಬೆಂಗಳೂರಿಗೆ ಬಂದಿದ್ದಾರೆ. ಜುಲೈ 1ರಂದು ಕಾರು ಚಾಲಕ ಸಾಗರ ವಿಮಾನ ನಿಲ್ದಾಣದಿಂದ ಹಾಸನದ ಹಳೇಬೀಡುಗೆ ಕರೆದುಕೊಂಡು ಬರುತ್ತಿರುವಾಗ ಸೀಗೆಗೇಟ್ ಹತ್ತಿರದ ಸೇತುವೆ ಮೇಲಿಂದ ಕಾರು ಬಿದ್ದಿದೆ. ಇಂದುಮತಿ ಮೃತಪಟ್ಟಿದ್ದಾರೆ. ಪತಿ ಯೋಗೇಶ್, ಕಾರು ಚಾಲಕ ಸಾಗರ ಗಾಯಗೊಂಡಿದ್ದಾರೆ.




error: Content is protected !!