ದರ್ಶನ್ ಬಂಧನದ ಬಗ್ಗೆ ಗೃಹ ಸಚಿವರು ಏನಂದರು?

89

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಆರೋಪಿಗಳನ್ನು ವಿಚಾರಣೆ ನಡೆಸುವಾಗು ದರ್ಶನ್ ಹೆಸರು ಬಂದಿದೆ. ತನಿಖೆ ಆಗುವ ತನಕ ಏನೂ ಹೇಳಲು ಆಗುವುದಿಲ್ಲ ಎಂದರು.

ಮೈಸೂರಿನಲ್ಲಿ ದರ್ಶನ್ ಬಂಧನವಾಗಿದೆ. ಅಲ್ಲಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ನೇರ ಭಾಗಿಯಾಗಿದ್ದಾರ? ಇಲ್ಲವಾ? ಅವರ ಹೆಸರು ಯಾಕೆ ಬಂದಿದೆ? ಕೊಲೆ ಯಾಕೆ ನಡೆದಿದೆ ಎನ್ನುವುದೆಲ್ಲವೂ ತನಿಖೆಯಿಂದ ತಿಳಿದು ಬರಲಿದೆ ಅಂತಾ ಹೇಳಿದರು.




error: Content is protected !!