ಶೀಘ್ರದಲ್ಲೇ ಕೇಂದ್ರಿಂದ ಹೆಚ್ಚಿನ ನೆರವು: ಸಿಎಂ

357

ವಿಜಯಪುರ: ಕೇಂದ್ರದಿಂದ ಇನ್ನು ಹೆಚ್ಚಿನ ಪರಿಹಾರ ಬರಲಿದೆ. ಸಂತ್ರಸ್ತರು ಆತಂಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಂದು ಬಾಗಿನ ಅರ್ಪಿಸಿ ಮಾತ್ನಾಡಿದ್ರು.

ಮಧ್ಯಂತರ ಪರಿಹಾರವಾಗಿ 1,200 ಕೋಟಿ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ನೆರವು ಸಿಗಲಿದೆ ಅಂತಾ ಹೇಳಿದ್ರು. ಪ್ರವಾಹದಿಂದ 38 ಸಾವಿರ ಕೋಟಿ ನಷ್ಟವಾಗಿದೆ. ನಮ್ಮ ಅಧಿಕಾರಿಗಳು ಸಂಪೂರ್ಣ ವರದಿಯನ್ನ ಕೇಂದ್ರಕ್ಕೆ ಸಲ್ಲಿಸಿದ್ದಾರೆ. ಕೇಂದ್ರದಿಂದ ಆಗಮಿಸಿದ್ದ ಅಧ್ಯಯನ ತಂಡಕ್ಕೂ ಇದು ಮನವರಿಕೆಯಾಗಿದೆ. ಕೇಂದ್ರದಿಂದ ನಮ್ಗೆ ಎಲ್ಲ ರೀತಿಯ ನೆರವು ಸಿಗುತ್ತೆ ಅಂತಾ ತಿಳಿಸಿದ್ರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು, ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತ್ನಾಡ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ಮಾಡುವುದು ಒಳ್ಳೆಯದು ಎಂದು ತಿರುಗೇಟು ನೀಡಿದ್ದಾರೆ.




error: Content is protected !!