ಆಟೋ ಡಿಕ್ಕಿ ಜಗಳಕ್ಕೆ ಹೋಯ್ತು ಎರಡು ಜೀವ

390

ಮೈಸೂರು: ಎರಡು ಆಟೋಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಶುರುವಾದ ಸಣ್ಣ ಜಗಳಕ್ಕೆ ಇಬ್ಬರು ಕೊಲೆಯಾಗಿದ್ದಾರೆ. ಜಿಲ್ಲೆಯ ಕೋಟೆ ಹುಂಡಿ ಬಳಿ ಈ ದುರ್ಘಟನೆ ನಡೆದಿದೆ.

ಲಗೇಜ್ ಆಟೋ ಹಾಗೂ ಪ್ಯಾಸೇಂಜರ್ ಆಟೋ ನಡುವೆ ಡಿಕ್ಕಿಯಾಗಿದೆ. ಈ ವಿಚಾರಕ್ಕೆ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋಗಿದೆ. ಆಗ ಪ್ಯಾಸೇಂಜರ್ ಆಟೋ ಚಾಲಕ ಯೋಗೇಶ ಎಂಬಾತ, ಚಾಕುವಿನಿಂದ ಲಗೇಜ್ ಆಟೋ ಚಾಲಕ ಟಿ.ಮಂಜುನಾಥ ಹಾಗೂ ಆರ್.ಮಂಜುನಾಥನಿಗೆ ಇರಿದಿದ್ದಾನೆ.

ಸಣ್ಣ ಜಗಳದಿಂದಾಗಿ ಚಾಲಕ ಹಾಗೂ ಆಟೋದಲ್ಲಿದ್ದವನ ಕೊಲೆಯಾಗಿದೆ. ಆರೋಪಿ ಯೋಗೇಶ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




error: Content is protected !!