ರಾಜ್ಯದಲ್ಲಿ 15 ಜನರಲ್ಲಿ ಐವರು ಗುಣಮುಖ

380

ಬೆಂಗಳೂರು: ರಾಜ್ಯದಲ್ಲಿ 15 ಮಂದಿಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿತ್ತು. ಇದರಲ್ಲಿ ಇದೀಗ ಐದು ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಇಂದು ಇಬ್ಬರು ಗುಣಮುಖರಾಗಿದ್ದಾರೆ. ಸೋಂಕು ಬಂದರೆ ಜೀವ ಹೋಗುತ್ತೆ ಅನ್ನೋ ಭಯದಲ್ಲಿದ್ರು. ಇದೀಗ ಆರೋಗ್ಯವಾಗಿ ಮನೆಗೆ ಹೋಗ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇಲ್ಲಿಯ ತನಕ 1 ಲಕ್ಷದ  40 ಸಾವಿರ ಮಂದಿಯನ್ನ ಬಂದರು, ವಿಮಾನ ನಿಲ್ದಾಣದಲ್ಲಿ ತಪಾಸಣೆ, 1,042 ಮಂದಿ ರಕ್ತ, ಕಫಾ ತಪಾಸಣೆ, ಇದರಲ್ಲಿ 915 ಮಂದಿ ರಿಪೋರ್ಟ್ ನೆಗಿಟಿವ್ ಬಂದಿದೆ. ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿದ್ದು, ಪಾಸಿಟೀವ್ ಇದ್ದವರನ್ನ ಆಸ್ಪತ್ರೆಗೆ ಸಾಗಿಸಲಾಗ್ತಿದೆ ಎಂದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2 ಸಾವಿರ ಹಾಸಿಗೆ, ಕಿಮ್ಸ್ ನಲ್ಲಿ 1 ಸಾವಿರ ಹಾಸಿಗೆ, ಕೆಸಿ ಜನರಲ್ ಆಸ್ಪತ್ರೆಯಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿರುವ ಐದು ಲ್ಯಾಬ್ ಗಳಲ್ಲಿ 300 ರಿಂದ 500 ರಕ್ತ ಮಾದರಿಗಳನ್ನ ಪರೀಕ್ಷಿಸಬಹುದು ಎಂದಿದ್ದಾರೆ. ಇನ್ನು ಮಾರ್ಚ್ 22ರಂದು ಜನತಾ ಕರ್ಫ್ಯೂ ಪಾಲಿಸುವ ಮೂಲಕ ನಾವೆಲ್ಲ ಒಟ್ಟಾಗಿ ಪ್ರಧಾನಿ ಕರೆಗೆ ಸ್ಪಂದಿಸೋಣ ಎಂದು ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.




error: Content is protected !!