ಸಾಲದ ಶೂಲಕ್ಕೆ ಸಿಂದಗಿಯ ರೈತ ಆತ್ಮಹತ್ಯೆ

569

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಬ್ಯಾಕೋಡ ಗ್ರಾಮದ 52 ವರ್ಷದ ಮರೆಪ್ಪ ಹರಿಜನ ಅನ್ನೋ ರೈತ, ಸಾಲ ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮನೆಯಲ್ಲಿ ನಸುಕಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.

ಪಿಕೆಪಿಎಸ್ ಬ್ಯಾಕೋಡ ಬ್ಯಾಂಕಿನಲ್ಲಿ 75 ಸಾವಿರ, ಸಿಂದಗಿಯ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದಲ್ಲಿ 20 ಸಾವಿರ, ಸಿಂದಗಿಯ ಸ್ಪಂದನಾ ಫೈನಾನ್ಸ್ ನಲ್ಲಿ 15 ಸಾವಿರ, ಡಿಸಿಸಿ ಬ್ಯಾಂಕಿನಲ್ಲಿ 15 ಸಾವಿರ, ಸಿಂದಗಿಯ ಗ್ರಾಮೀಣ ಕೂಟ ಬ್ಯಾಂಕಿನಲ್ಲಿ 50 ಸಾವಿರ, ಕೈಗಡ 3 ಲಕ್ಷ ಸಾಲ ಸೇರಿದಂತೆ ಒಟ್ಟು 5 ಲಕ್ಷ 75 ಸಾವಿರ ರೂಪಾಯಿ ಬೆಳೆ ಸಾಲ ಹಾಗೂ ಜಮೀನು ಕೆಲಸದ ಸಲುವಾಗಿ ಸಾಲ ಮಾಡಿದ್ದನಂತೆ.

ಸಾಲವನ್ನ ತೀರಿಸಲು ಆಗದೆ ಮಾನಸಿಕವಾಗಿ ನೊಂದುಕೊಂಡಿದ್ದ ರೈತ ಮರೆಪ್ಪ ಹರಿಜನ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




error: Content is protected !!