ರಾಮನಗರ: ಮಗನನ್ನೇ ಕೊಂದ ತಂದೆ

136

ಪ್ರಜಾಸ್ತ್ರ ಅಪರಾಧ ಸುದ್ದಿ

ರಾಮನಗರ: ಮಚ್ಚಿನಿಂದ ಮಗನನ್ನೇ ತಂದೆ ಕೊಂದ ಘಟನೆ ಜಿಲ್ಲೆಯ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. 31 ವರ್ಷದ ಭಾಸ್ಕರ್ ಕೊಲೆಯಾದ ದುರ್ದೈವಿ. ಕೃಷ್ಣಪ್ಪ ಕೊಲೆ ಮಾಡಿದ ತಂದೆ.

ಹಣದ ವಿಚಾರವಾಗಿ ತಂದೆ ಹಾಗೂ ಮಗನ ನಡುವೆ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಮಚ್ಚಿನಿಂದ ತಂದೆ ಮಗನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಕೃಷ್ಣಪ್ಪನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.




error: Content is protected !!