ಪ್ರಜಾಸ್ತ್ರ ಸುದ್ದಿ
ನವದೆಹಲಿ: ತಾಜ್ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಬೋಗಿಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ಸೋಮವಾರ ಸರಿತಾ ವಿಹಾರ್ ನಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.
ಸಂಜೆ ಸುಮಾರು 4.25ರ ಹೊತ್ತಿನಲ್ಲಿ ಅಗ್ನಿ ಅವಗಡ ನಡೆದಿದೆ. ದೆಹಲಿ ಅಗ್ನಿಶಾಮಕ ಸೇವೆಗಳ ವಿಭಾಗಕ್ಕೆ ಕರೆ ಬಂದಿದೆ. ತಕ್ಷಣ ಅಲ್ಲಿಗೆ ತೆರಳಿದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದರು. ತುಘಲಕಾಬಾದ್-ಓಕ್ಲಾ ನಡುವೆ ಸಂಚಿರುವ ತಾಜ್ ಎಕ್ಸ್ ಪ್ರೆಸ್ ನ 4 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.