ಭಾರಿ ಮಳೆಗೆ 20 ಮನೆಗಳು ಜಲಾವೃತ, ಆಟೋ ಚಾಲಕ ಸಾವು

93

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆ ತನಕ ಭಾರಿ ಮಳೆಯಾಗಿದೆ. ಇದರಿಂದಾಗಿ ಕೊಟ್ಟಾರ ಚೌಕಿಯಲ್ಲಿನ ತಗ್ಗು ಪ್ರದೇಶದ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಆಟೋ ಚಾಲಕರೊಬ್ಬರು ರಾಜಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ.

ದೀಪಕ್ ಆಚಾರ್ಯ(44) ಮೃತ ದುರ್ದೈವಿಯಾಗಿದ್ದಾರೆ. ಭರ್ಜರಿ ಮಳೆಯಿಂದಾಗಿ ಕಾಲುವೆ ತುಂಬಿ ನೀರು ರಸ್ತೆ ಮೇಲೂ ಹರಿದಿದೆ. ಈ ವೇಳೆ ಆಟೋ ಕಾಲುವೆಗೆ ಬಿದ್ದಿದೆ. ಇದರಿಂದಾಗಿ ಮೃತಪಟ್ಟಿದ್ದಾರೆ. ಇನ್ನು ಸಾಗರ ಕೋರ್ಟ್ ಪ್ರದೇಶದ ಮನೆಯೊಂದರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷದ ಲಕ್ಷ್ಮಿ ಎನ್ನುವ ವೃದ್ಧೆಯನ್ನು ರಕ್ಷಿಸಲಾಗಿದೆ.

ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ಜನಜೀವನ ಸಾಕಷ್ಟು ಅಸ್ತವ್ಯಸ್ಥವಾಗಿದೆ.




error: Content is protected !!