ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪರವಾನಿಗೆ ನವೀಕರಿಸದ ಆರೋಪ ಸಂಬಂಧ ಪವರ್ ಟಿವಿ ಅನ್ನು ಜುಲೈ 8ರ ತನಕ ಸ್ಥಗಿತಗೊಳಿಸಬೇಕೆಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ನಿರ್ದೇಶನ ತೆರವಿಗೆ ವಿಭಾಗೀಯ ನ್ಯಾಯಪೀಠ ತಿಳಿಸಿದೆ.
ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿದವರ ವಾದವನ್ನು ಆಲಿಸಿ ಇದನ್ನು 6 ವಾರಗಳಲ್ಲಿ ಇತ್ಯರ್ಥಗೊಳಿಸಬೇಕು ಎಂದು ಗಡುವು ನೀಡಲಾಗಿದೆ.
ತಮ್ಮ ವಿರುದ್ಧ ಪವರ್ ಟಿವಿ ಮಾನಹಾನಿಕಾರಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಜೆಡಿಎಸ್ ಎಂಎಲ್ಸಿ ಎಚ್.ಎಂ ರಮೇಶಗೌಡ, ಇವರ ಪತ್ನಿ ಡಾ.ಎ.ರಮ್ಯಾ ರಮೇಶಗೌಡ, ಐಪಿಎಸ್ ಅಧಿಕಾರಿ ಬಿ.ಆರ್ ರವಿಕಾಂತೇಗೌಡ ಅವರು ರಿಟ್ ಅರ್ಜಿ ಸಲ್ಲಿಸಿದ್ದ ವೇಳೆ ಪರವಾನಿಗೆ ನವೀಕರಣ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಜೂನ್ 25ರಂದು ಜುಲೈ 8ರ ತನಕ ಚಾನಲ್ ನಲ್ಲಿ ಯಾವುದೇ ರೀತಿಯ ಸುದ್ದಿ, ಕಾರ್ಯಕ್ರಮಗಳನ್ನು ಪ್ರಸಾರಗೊಳಿಸದಂತೆ ಆದೇಶಿಸಿತ್ತು.