ಯಾದಗಿರಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ನೀಡಿರುವ ಶೋಕಾಸ್ ನೋಟಿಸ್ ಗೆ ಉತ್ತರಿಸದಿರುವ ಕಾರಣಕ್ಕೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆಕ್ರೋಶ ಹೊರ ಹಾಕಿದ್ದಾರೆ.
ಯಾದಗಿರಿಯಲ್ಲಿ ಮಾತ್ನಾಡಿದ ಕಟೀಲ, ಶೋಕಾಸ್ ನೋಟಿಸ್ ಗೆ ಉತ್ತರ ನೀಡುವುದು ಅವರ ಜವಾಬ್ದಾರಿ. ಅದಕ್ಕೆ ಉತ್ತರ ಕೊಡದೆ ಹೋದರೆ ಅದು ಅಹಂಕಾರವಾಗುತ್ತೆ. ಎಷ್ಟೇ ದೊಡ್ಡ ವ್ಯಕ್ತಿಯಾದ್ರೂ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ ಅಂತಾ ಹೇಳಿದ್ರು.
ಪಕ್ಷದಿಂದ ಬಿ ಫಾರಂ ಪಡೆದ ಮೇಲೆ ಪಕ್ಷದ ನೀತಿ, ನಿಯಮದೊಳಗೆ ಮಾತ್ನಾಡಬೇಕು. ಅದರಲ್ಲಿ ಏನಾದ್ರೂ ವ್ಯತ್ಯಾಸ ಆದ್ರೆ, ಕಾರಣ ಕೇಳುವುದು ಸಹಜ. ಹೀಗಾಗಿ ಕೇಂದ್ರದಿಂದ ವಿವರಣೆ ಕೇಳಲಾಗಿದೆ ಅಂತಾ ಹೇಳಿದ್ರು.