ಆಕಸ್ಮಿಕ ವಿದ್ಯುತ್ ಅನಾಹುತಕ್ಕೆ 50 ಎಕರೆ ಕಬ್ಬು ನಾಶ

222

ಪ್ರಜಾಸ್ತ್ರ ಸುದ್ದಿ

ಧಾರವಾಡ: ಹೊಲಗಳ ಮಧ್ಯೆ ಹಾಯ್ದು ಹೋದ ವಿದ್ಯುತ್ ಸಂಪರ್ಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಬರೋಬ್ಬರಿ 50 ಎಕರೆಯಷ್ಟು ಕಬ್ಬು ನಾಶವಾಗಿದೆ. ಅದರಿಂದಾಗಿ ಲಕ್ಷಾಂತರ ರೂಪಾಯಿಯಷ್ಟು ಬೆಳೆ ನಾಶವಾಗಿದೆ.

ದೇವರಹುಬ್ಬಳ್ಳಿಯ ಹತ್ತಿರದ ಸುಮಾರು 10ಕ್ಕೂ ಹೆಚ್ಚು ರೈತರ ಹೊಲಗಳಲ್ಲಿ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




error: Content is protected !!