ಆಸ್ತಿ ಕಲಕ, ಠಾಣೆ ಮೆಟ್ಟಿಲು ಏರಿದ ವಿಜಯ ಸಂಕೇಶ್ವರ ಪುತ್ರಿ

78

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಪತಿಯ ಸಹೋದರ, ಪತ್ನಿ ಹಾಗೂ ಮಗ ತಮ್ಮ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದಾರೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ, ಮಾಜಿ ಸಂಸದ ಎಸ್.ಬಿ ಸಿದ್ನಾಳರ ಕಿರಿಯ ಸೊಸೆ ದೀಪಾ ಸಿದ್ನಾಳ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

ದೀಪಿ ಪತಿ ಶಿವಕಾಂತ್ ಇತ್ತೀಚೆಗೆ ಮೃತಪಟ್ಟಿದ್ದಾರೆ. ಪತಿಯ ಸಮಾಧಿ ಸುತ್ತ ಮಾಟ ಮಂತ್ರ ಮಾಡಿದ್ದಾರೆ. ಪತಿಯ ಸಾವಿಗೂ ಇದೆ ಕಾರಣವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳು ವಿಜಯಕಾಂತ ಹಾಲಿನ ಡೇರಿ ಹಾಗೂ ಅದರ ಸ್ವತ್ತುಗಳನ್ನು ಕಬಳಿಸಲು ಪತಿಯ ಸಹೋದರ ಶಶಿಕಾಂತ್, ಅವರ ಪತ್ನಿ ವಾಣಿ, ಪುತ್ರ ದಿಗ್ವಿಜಯ ಸಂಚು ರೂಪಿಸಿದ್ದಾರೆ ಎಂದು  ನಗರದ ಕ್ಯಾಂಪ್ ಪೊಲೀಸ್ ಠಾಣೆ ಎಫ್ಐಆರ್ ದಾಖಲಿಸಿದ್ದಾರೆ.

ಭಾರತೀಯ ದಂಡಸಂಹಿತೆ 1860 ಸೆಕ್ಷನ್ 120 ಬಿ, 506, 307 ಹಾಗೂ ಮಾಟ ಮಂತ್ರ ಕಾಯ್ದೆ 2007ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೂಲಕ ತಮ್ಮ ಕುಟುಂಬಸ್ಥರೊಂದಿಗೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.




error: Content is protected !!