ರಾಜ್ಯದಲ್ಲಿ ಮಳೆಯಿಂದಾಗಿ ಇದುವರೆಗೂ 20 ಜನರ ಸಾವು

56

ಪ್ರಜಾಸ್ತ್ರ ಸುದ್ದಿ

ಮೈಸೂರು: ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ಈ ಕುರಿತು ಮಾತನಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಮಳೆಯಿಂದಾಗಿ ಇದುವರೆಗೂ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಮಳೆಯ ಅನಾಹುತದಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಜೀವಹಾನಿಗಳು ಸಂಭವಿಸಿವೆ. ಬೆಳೆ ಹಾನಿಯಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಮಳೆಯಿಂದ ಹಾನಿಗೆ ಒಳಗಾದ ಜನರಿಗೆ ಪರಿಹಾರ ಕೊಡುವಷ್ಟು ಹಣ ಸಧ್ಯಕ್ಕೆ ಇದೆ. ಮುಂದೆ ಮಳೆಯಿಂದ ಹೆಚ್ಚಿನ ಸಮಸ್ಯೆಯಾದರೆ ಕೇಂದ್ರದ ಬಳಿ ಪರಿಹಾರ ಕೇಳಲಾಗುವುದು ಎಂದಿದ್ದಾರೆ.




error: Content is protected !!