ಐಟಿ ಅಧಿಕಾರಿ ಸೋಗಿನ ಹೈಟೆಕ್ ಕಳ್ಳ ಅರೆಸ್ಟ್

305

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಐಟಿ ಅಧಿಕಾರಿಯೆಂದು ಹೇಳಿಕೊಂಡು ಭರ್ಜರಿಯಾಗಿ ಕಳ್ಳತನ ಮಾಡ್ತಿದ್ದ ಹೈಟೆಕ್ ಕಳ್ಳನನ್ನ ಬಂಧಿಸಲಾಗಿದೆ. ಬಾಗಲೂರು ಠಾಣೆ ಪೊಲೀಸರು ಬೀದರ ಮೂಲದ ವಿಶಾಲ ಎಂಬಾತನನ್ನ ಬಂಧಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ಹೇಳಿ ಚಿನ್ನಾಭರಣ ಹಾಗೂ ಮೊಬೈಲ್ ಶಾಪ್ ಅಂಗಡಿಗಳಿಗೆ ಹೋಗ್ತಿದ್ದ. ಚಿನ್ನಾಭರಣ ಪರಿಶೀಲನೆ ಮಾಡಬೇಕು ಎಂದು ಹೇಳಿ ಬಂಗಾರ, ಹಣ ಎಗರಿಸ್ತಿದ್ದ. ಮೊಬೈಲ್ ಶಾಪ್ ಗಳಿಗೆ ಹೋಗಿ ದುಬಾರಿ ಮೊಬೈಲ್ ಗಳನ್ನ ಸಹ ಎಗರಿಸ್ತಿದ್ದ.

ಬೀದರ ಜಿಲ್ಲೆಯವನಾದ ಕಳ್ಳ ವಿಶಾಲ, ಬೆಂಗಳೂರು ಗ್ರಾಮಾಂತರ ಹಾಗೂ ದೊಡ್ಡಬಳ್ಳಾಪುರದಲ್ಲಿ ವಾಸವಾಗಿರ್ತಿದ್ದ. ಇವನು ಬರೀ ಕರ್ನಾಟಕ ಮಾತ್ರವಲ್ಲ, ತೆಲಂಗಾಣ, ಆಂಧ್ರ ಹಾಗೂ ಮಧ್ಯಪ್ರದೇಶದಲ್ಲಿಯೂ ಕೈಚಳಕ ತೋರಿಸಿದ್ದಾನೆ. ಖಚಿತ ಮಾಹಿತಿ ಪಡೆದ ಬಾಗಲೂರು ಪೊಲೀಸರು ಕೇರಳದಲ್ಲಿ ಈತನನ್ನ ಬಂಧಿಸಿದ್ದಾರೆ. ಬಂಧಿತನಿಂದ ಚಿನ್ನಾಭರಣ, ಮೊಬೈಲ್ ಸೇರಿ 12 ಲಕ್ಷದ 80 ಸಾವಿರ ರೂಪಾಯಿ ವಶ ಪಡಿಸಿಕೊಂಡಿದ್ದಾರೆ.




error: Content is protected !!