ನಾದಧಾರೆ ಹಾಡು ಬಿಡುಗಡೆ

567

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೆರೆಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವರ ಕುರಿತು ರಚಿಸಲಾದ ನಾದಧಾರೆ ಅನ್ನೋ ಅಲ್ಬಂ ಇಂದು ಬಿಡುಗಡೆಯಾಯಿತು.

ನಗರದ ಮಲ್ಲೇಶ್ವರಂನಲ್ಲಿರುವ ಗಂಗಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ನಾದ ಪ್ರಿಯನಿಗೆ ನಾದಧಾರೆ ಭಕ್ತಿ ಗೀತೆಗಳ ಧ್ವನಿಸುರಳಿ ಲೋಕಾರ್ಪಣೆಗೊಂಡಿತು. ಈ ವೇಳೆ ಅಭಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಪತ್ರಕರ್ತ ಅಭಿಷೇಕ್ ಶೆಟ್ಟಿ ಹೆಬ್ರಿ, ಪತ್ರಕರ್ತ, ಯುವ ಬರಹಗಾರ ರಾಜು ಅಷ್ಟೇ ಸೇರಿ ಇತರರು ಉಪಸ್ಥಿತರಿದ್ದರು.

ಶೆಟ್ಟಿ ಅಜಯ್ ರಾಜ್ ಸಾಹಿತ್ಯವಿದೆ. ಅನುಶ್ರೀ ಆಚಾರ್ಯ, ವಾಣಿ ಮಾಧ್ವ ಕಂಠಸಿರಿಯಲ್ಲಿ ಭಕ್ತಿಗೀತೆಗಳು ಮೂಡಿಬಂದಿವೆ. ಚಿತ್ರಕೂಟ ಯುಟ್ಯೂಬ್ ಚಾನೆಲ್ ನಲ್ಲಿ ಹಾಡುಗಳನ್ನು ಕೇಳಬಹುದು.




error: Content is protected !!