ಇಡಿ ಪ್ರಶ್ನಿಸಿದರೆ ನನ್ನನ್ನು ದೇವರು ಕಳಿಸಿದ್ದಾರೆ ಎನ್ನುತ್ತಾರೆ: ರಾಹುಲ್ ಗಾಂಧಿ

85

ಪ್ರಜಾಸ್ತ್ರ ಸುದ್ದಿ

ಪಾಟ್ನಾ: ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮುಂದೆ ಇಡಿ ಕೇಳುವ ಪ್ರಶ್ನೆಗಳಿಗೆ ಮೋದಿ ನನ್ನನ್ನು ದೇವರು ಕಳಿಸಿದ್ದಾರೆ ಎನ್ನುತ್ತಾರೆ ಎಂದು ಕಾಲೆಳೆದರು.

ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ರಾಜಪ್ರಭುತ್ವವನ್ನು ತೊಡೆದು ಹಾಕುವ ಕೆಲಸ ಮಾಡಿತು. ಮೋದಿ ಈಗ ರಾಜ್ಯಗಳಲ್ಲಿ ಅಂಬಾನಿ, ಅದಾನಿ ಅನ್ನೋ ದೊರೆಗಳನ್ನು ನೇಮಿಸುತ್ತಿದ್ದಾರೆ. ಸುದೀರ್ಘ ಭಾಷಣ, ದೇಶ ವಿಭಜಿಸುವ ಕೆಲಸ ಬಿಡಿ. ದೇಶದ ಯುವ ಜನತೆಗೆ ಎಷ್ಟು ಉದ್ಯೋಗ ನೀಡಿದ್ದೀರಿ ಎಂದು ಉತ್ತರಿಸಿ ಅಂತಾ ಕೇಳಿದರು.




error: Content is protected !!