ಪ್ರಜಾಸ್ತ್ರ ಸುದ್ದಿ
ಪಾವಗಡ: ಬಿಯರ್ ಬಾಟಲ್ ನಿಂದ ಕೆಪಿಟಿಸಿಎಲ್ ನ ಜೂನಿಯರ್ ಇಂಜಿನಿಯರ್ ಗಳು ಹೊಡೆದಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಕಳೆದ ಗುರುವಾರ ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಜೂನಿಯರ್ ಗಳಾದ ವಾದಿರಾಜ್, ಶ್ರೀನಿವಾಸ್ ಹಾಗೂ ಬೆಸ್ಕಾಂ ಸಿಬ್ಬಂದಿ ಸಂತೋಷ್, ನರಸಿಂಹಮೂರ್ತಿ ಹೊಡೆದಾಡಿಕೊಂಡಿದ್ದಾರೆ. ಪಟ್ಟಣದ ಹೊರವಲಯದಲ್ಲಿ ಎಣ್ಣೆ ಪಾರ್ಟಿ ನಡೆಸಿದ್ದಾರೆ. ಈ ವೇಳೆ ಯಾವುದೋ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಟದ ಹಂತಕ್ಕೆ ಹೋಗಿದೆ. ಅದು ಇದೀಗ ಬೆಳಕಿಗೆ ಬಂದಿದೆ.