LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಓದಿನಿಂದಲೇ ಬದುಕು ಉಜ್ವಲ: ಸಿದ್ದಬಸು ಕುಂಬಾರ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಓದಿನಿಂದಲೆ ನಮ್ಮ ಬದುಕು ಉಜ್ವಲವಾಗುತ್ತದೆ ಎಂದು ನಿವೃತ್ತ ಗ್ರಂಥಪಾಲಕ ಸಿದ್ದಬಸು ಕುಂಬಾರ ಹೇಳಿದರು. ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ(CM Managoli) ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಪಾಲಕರ ದಿನಾಚಾರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತಮ ಹಾಗೂ ಸುಸಜ್ಜಿತ ಗ್ರಂಥಾಲಯ ಓದಿನ ಕಡೆಗೆ ನಮ್ಮನ್ನು ಸೆಳೆದುಕೊಳ್ಳುತ್ತದೆ. ಶಾಲಾ, ಕಾಲೇಜುಗಳ(School and College) ಮತ್ತು ನಗರದ ಅನೇಕ ಗ್ರಂಥಾಲಯದಲ್ಲಿ(Library) ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯವನ್ನು ಓದಿಗಾಗಿ ಉಪಯೋಗ ಮಾಡಿಕೊಳ್ಳಬೇಕು. ಇಂದು ಜಗತ್ತು ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಜಗತ್ತಿನ ಜ್ಞಾನವನ್ನು ನಾವೆಲ್ಲ ಹೆಚ್ಚು ಹೆಚ್ಚು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಅರವಿಂದ ಮನಗೂಳಿ, ಎಸ್.ಎಮ್.ಬಿರಾದಾರ, ಎಸ್.ಕೆ.ಹೂಗಾರ, ಡಾ.ಆರತಿ ಅರಳಗುಂಡಗಿ, ಜ್ಯೋತಿ ಹಿಟ್ನಳ್ಳಿ, ಸುಧಾ ಮಹಿಶಾಳೆ, ಗೀತಾ ಮುರಗಾನೂರ, ಜಿ.ಎಸ್.ಬಡಿಗೇರ, ಜೆ.ಎಸ್.ಹಿಟ್ನಳ್ಳಿ, ಮಹಾಂತೇಶ ಸುಂಗಠಾಣ, ಡಾ.ಅಂಬರೀಶ ಬಿರಾದಾರ, ಗ್ರಂಥಪಾಲಕ ಸತೀಶ ಬಿರಾದಾರ, ರಮೇಶ ಯಂಕಂಚಿಕರ, ವಿ.ಬಿ.ಪಾಟೀಲ, ಎಸ್.ವೈ ನಾಯ್ಕೋಡಿ, ಎಸ್.ಗುರಲಿಂಗಪ್ಪ, ಎಸ್.ಎಂ.ಅರ್ಜುಣಗಿ, ಎಸ್.ಎಂ.ಇಂಗಳೆ ಸೇರಿದಂತೆ ಅನೇಕರು ಇದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST