LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್ ನಾಗೂರ ಅಮಾನತು

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಕರ್ತವ್ಯಲೋಪ ಎಸಗಿರುವ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎನ್.ಎಚ್ ನಾಗೂರ ಅಮಾನತುಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜನ ರಾಮಚಂದ್ರಪ್ಪ ಪ್ರಕಟಣೆ ಹೊರಡಿಸಿದ್ದಾರೆ. 2024-25ನೇ ಸಾಲಿನಲ್ಲಿ ಹೊಸ ಶಾಲೆ ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ನಿಯಮಬಾಹಿರ ಅನುಮೋದನೆ ಪ್ರಕರಣಗಳ ಬಗ್ಗೆ ಧಾರವಾಡ ವಿಭಾಗ ಅಪರ ಆಯುಕ್ತರು ತಪಾಸಣೆ ವರದಿ ಸಲ್ಲಿಸಿದ್ದಾರೆ.

122 ಅರ್ಜಿಗಳು ಸಲ್ಲಿಕೆಯಾಗಿವೆ. 58 ಅರ್ಜಿಗಳು ಅನುಮೋದನೆಗೊಂಡಿವೆ. 64 ಅರ್ಜಿಗಳು ತಿರಸ್ಕೃತಗೊಂಡಿವೆ. 77 ಅರ್ಜಿಗಳನ್ನು ರಿಕಾಲ್ ಮಾಡಲಾಗಿದೆ. 45 ಅರ್ಜಿಗಳನ್ನು ನಿಯಮಾನುಸಾರ ರಿಕಾಲ್ ಮಾಡಿರುವುದಿಲ್ಲ. ಅಪರ ಆಯುಕ್ತರ ಕಚೇರಿಯ ನಿರ್ದೇಶಕರು, ಸಿಬ್ಬಂದಿ ಎನ್.ಎಚ್ ನಾಗೂರ ಅವರ ಲಿಖಿತ ಹೇಳಿಕೆಯನ್ನು ಪರಿಶೀಲಿಸಿದಾಗ, ಸ್ವೀಕರಿಸಿದ 77 ಅರ್ಜಿಗಳಲ್ಲಿ 45 ಅರ್ಜಿಗಳಲ್ಲಿ ರೋಲ್ ಬ್ಯಾಕ್ ಅವಕಾಶ ನೀಡದೆ, ನೇರವಾಗಿ 24 ಅರ್ಜಿಗಳನ್ನು ತಿರಸ್ಕಾರ ಮಾಡಿದ್ದಾರೆ. ಹೀಗೆ ಹಲವು ವಿಚಾರಗಳಲ್ಲಿ 2024-25ನೇ ಸಾಲಿನ ಹೊಸ ಸಾಲಿಗೆ ನೋಂದಣಿ ಪ್ರಕ್ರಿಯೆಯಲ್ಲಿ ನಿಯಮಬಾಹಿರವಾಗಿ ಕೃತ್ಯ ಎಸಗಿ ಇಲಾಖೆಗೆ ಮುಜುಗರ ಉಂಟು ಮಾಡಿದ್ದು, ಎನ್.ಎಚ್ ನಾಗೂರ ಅವರನ್ನು ಅಮನತುಗೊಳಿಸಲು ಹಾಗೂ ಉಮಾದೇವಿ ಸೊನ್ನದ ವಿರುದ್ಧ ಶಿಸ್ತುಕ್ರಮ ಜರಗಿಸುವಂತೆ ಕೋರಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST