ಪ್ರಜಾಸ್ತ್ರ ಸುದ್ದಿ
ಚಂದ್ರಾಪುರ(Chandrapur): ಹುಲಿಯೊಂದು ದಾಳಿ ಮಾಡಿರುವುದರಿಂದ ಏಕಕಾಲದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ. ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಸಿಂಧೇವಾಡಿ ತಾಲೂಕಿನ ಗುಂಜೆವಾಹಿ-ಪಾಪನ್ಪುರ್ ಪ್ರದೇಶದಲ್ಲಿ ಗುರುವಾರ ನಡೆದಿದೆ.
10 ಮಹಿಳೆಯರು ಕಟ್ಟಿಗೆ ತರಲು ಕಾಡಿಗೆ ಹೋಗಿದ್ದಾಗ ಪೊದೆಯಲ್ಲಿ ಕುಳಿತಿದ್ದ ಹುಲಿ ದಾಳಿ ಮಾಡಿದೆ. ಇದರಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದು ವಿಚಿತ್ರ. ಇನ್ನು ಹಲವರಿಗೆ ಗಾಯಗಳಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ಗುಂಜೆವಾಹಿ ಗ್ರಾಮದ ಜನರು ಆತಂಕದಲ್ಲಿದ್ದಾರೆ.



