ಪ್ರಜಾಸ್ತ್ರ ಸುದ್ದಿ
ಗದಗ(Gadaga): 33 ದಿನಗಳ ಶಿವಯೋಗ ಸಮಾಧಿಯಿಂದ ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನ ಮಠದಲ್ಲಿ ರಾಚೋಟೀಶ್ವರ ಶಿವಾಚಾರ್ಯ ಸ್ವಾಮೀಜಿ ಭಾನುವಾರ ಹೊರಬಂದರು. ಈ ಮೂಲಕ 60ನೇ ಮೌನಾನುಷ್ಠಾನ ಹಾಗೂ 16ನೇ ಶಿವಯೋಗ ಸಮಾಧಿ ಮುಕ್ತಾಯಗೊಂಡಿತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಆಹಾರ, ನೀರು, ಗಾಳಿ, ಬೆಳಕು ಇಲ್ಲದ ಜಾಗದಲ್ಲಿ 33 ದಿನಗಳ ಕಾಲ ತಪಸ್ಸು ಆಚರಿಸಿದ ಸ್ವಾಮೀಜಿಯನ್ನು ಗೋಡೆ ಒಡೆದು ಹೊರಗೆ ಕರೆದುಕೊಂಡು ಬರಲಾಯಿತು. ಸಾಕಷ್ಟು ನಿಯತ್ರಾಣಗೊಂಡಿದ್ದ ಅವರನ್ನು ವಿವಿಧ ಮಠಾಧೀಶರು ಹೊತ್ತುಕೊಂಡು ಬಂದರು. ನಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.



