ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಯ ನೇಮಕವಾತಿಯಲ್ಲಿ ಸುಳ್ಳು ಆದಾಯ ಹಾಗೂ ಜಾತಿ ಪ್ರಮಾಣಪತ್ರ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೆಪಿಎಸ್ ಸಿ ಆಯೋಗದ ವಿರುದ್ಧ ಕಿಡಿ ಕಾರಿದೆ. ಪ್ರತಿಬಾರಿಯೂ ಒಂದಲ್ಲ ಒಂದು ಭಾನಗಡಿ ನಡೆದೇ ಇರುತ್ತೆ ಎಂದು ಕೆಪಿಎಸ್ ಸಿ ಆಯೋಗದ ವಿರುದ್ಧ ಕಿಡಿ ಕಾರಿದೆ.
ನನ್ನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಬೇಕು ಎಂದು ಕೆಪಿಎಸ್ ಸಿ ಆಯೋಗದಿಂದ ಅಮಾನತುಗೊಂಡಿರುವ ಅಧ್ಯಕ್ಷರ ಪುತ್ರಿ ಸುಮಾ.ಎಸ್ ಸಾಹುಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಲಾಯಿತು. ಅರ್ಜಿದಾರರ ಪರ ಎಂ.ಅರುಣ್ ಶ್ಯಾಮ್ ಅನ್ನೋ ಹಿರಿಯ ವಕೀಲರು ವಾದ ಮಾಡಿದರು.
ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಾಗುವ ಮುನ್ನ ಕಾನೂನು ಪ್ರಕ್ರಿಯೆಯಲ್ಲಿ ಮೂಲಭೂತ ತಪ್ಪುಗಳಾಗಿವೆ. ಹೀಗಾಗಿ ಈ ಪ್ರಕರಣ ಊರ್ಜಿತವಾಗಲು ಸಾಧ್ಯವಿಲ್ಲವೆಂದು ಹೇಳಿದರು. ಇದಕ್ಕೆ ಹೈಕೋರ್ಟ್ ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆಕ್ರೋಶ ವ್ಯಕ್ತಪಡಿಸಿದರು. ಹಾಗಿದ್ದರೆ ತನಿಖೆ ನಡೆಯಲಿ. ನೀವು ಅಲ್ಲೆ ಖುಲಾಸೆಯಾಗಿ ಬನ್ನಿ ಎಂದರು.



