ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಈಗ ನನಗೆ ಸಿಕ್ಕಿರುವ ಸ್ಥಾನಕ್ಕೆ ತೃಪ್ತನಾಗಿದ್ದೇನೆ. ಕಾಂಗ್ರೆಸ್ಸಿನಲ್ಲಿ ತಾಳ್ಮೆಯಿಂದ ಕಾಯುವುದು ಮುಖ್ಯ. ನಾನು ಕೂಡಾ 2028ರವರೆಗೂ ಕಾಯುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಅಹಿಂದ ನಾಯಕರನ್ನು ಹಿಂದಕ್ಕೆ ತಳ್ಳುವ ಕೆಲಸ ಹಿಂದಿನಿಂದಲೂ ನಡೆದು ಬಂದಿದೆ. ಎಲ್ಲವನ್ನು ಮೀರಿ ನಾವು ಬೆಳೆಯಬೇಕು. ಬೆಳೆಯುತ್ತೇವೆ ಅಂತಾ ಮಾರ್ಮಿಕವಾಗಿ ಹೇಳಿದ್ದಾರೆ.
ನಿಮಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಿಸುವುದರಿಂದ ಸಿದ್ದರಾಮಯ್ಯನವರು ಹಿಂದೆ ಸರಿದಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಪರಮೇಶ್ವರ ಅವರಿಗೆ ಕೊಡಿಸಿದ್ದಾರೆ. ಮುಂದೆ ನೋಡೋಣ. ಆದರೆ, ನಮ್ಮ ಜನ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಅವರಿಗೆ ಬೇಸರವಾಗಿರುವುದು ಸಹಜ ಎಂದರು.



