Ad imageAd image

ಸುಧಾಕರ ರೈತರ, ಬಡವರ ಪರ ಕೆಲಸ ಮಾಡಿದವರು: ಸಿಎಂ ಸಿದ್ದರಾಮಯ್ಯ

Nagesh Talawar
ಸುಧಾಕರ ರೈತರ, ಬಡವರ ಪರ ಕೆಲಸ ಮಾಡಿದವರು: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಚಿವ ಡಿ.ಸುಧಾಕರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. ರೈತರ, ಬಡವರ ಪರ ಅಪಾರ ಕೆಲಸ ಮಾಡಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ಸದಾಶಿವನಗರದಲ್ಲಿನ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದು ಮಾತನಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹ ಅಂತಿಮ ದರ್ಶನ ಪಡೆದರು.

2008ರಿಂದ ಹಿರಿಯೂರು ಶಾಸಕರಾಗಿದ್ದರು. ಎರಡು ಬಾರಿ ಸಚಿವರಾದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅವರ ಚಿಕ್ಕಪ್ಪ ಜಯಣ್ಣ ಸಹ ಶಾಸಕರಾಗಿದ್ದರು. ಚಳ್ಳಕೆರೆ ಎಸ್ಟಿ ಮೀಸಲು ಕ್ಷೇತ್ರವಾದ ಬಳಿಕ ಹಿರಿಯೂರನಿಂದ ಸ್ಪರ್ಧಿಸಿ ಗೆದ್ದರು ಅಂತಾ ಹೇಳಿದರು.

ಚಿತ್ರದುರ್ಗದಲ್ಲಿ ಮೂರು ದಿನ ಶೋಕಾಚರಣೆ ಮಾಡಲಾಗುವುದು. ಸೋಮವಾರ ರಜೆ ನೀಡಲಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ. ಈ ವೇಳೆ ನಾನು ಭಾಗವಹಿಸಲಿದ್ದೇನೆ ಅಂತಾ ಹೇಳಿದರು.

WhatsApp Group Join Now
Telegram Group Join Now
Share This Article